logo

ಕಲಾ
ಕರ್ನಾಟಕ

www.kalakarnataka.com

ಸುವಿಚಾರ
ಬುದ್ಧನಾದ ; ಬದ್ಧನಾದ..????ಸಿದ್ಧನಾದ ಸಿದ್ಧಾರ್ಥ ತನ್ನ ಸಿದ್ಧಾಂತ ಸಾಧನೆಗೆ , ಸತ್ಯದ ಪಥದತ್ತ ಸಾಗಲು ಶಪಥಗೈದ, ಆಶೆಗಳ ಮೆಟ್ಟಿ ಗಟ್ಟಿ ಮನದಿ ತೆರೆದ ಹೊಸ ಮನ್ವಂತರದ ಕಾರುಣ್ಯದ ಶಾಂತಿ ಬಾಗಿಲು. ಬದುಕಿನ ನಿಜ ಸಾರ ತಿಳಿದೆದ್ದ , ಬುದ್ಧನಾದ, ಬದ್ಧನಾದ.. ...ಶಿ.ಗು.ಕುಸುಗಲ್ಲ
- - ಶಿ.ಗು.ಕುಸುಗಲ್ಲ

ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಸಪ್ಟೆಂಬರ್ 10 ರಿಂದ 16-2024 ರವರೆಗೆ 'ಕಲರಾ೯ಗ್ ' ಏಕವ್ಯಕ್ತಿ ಕಲಾಪ್ರದರ್ಶನ

ಕಲಾಸುದ್ದಿ
Published By: Kala Karanataka
Last Updated Date:  13-Jan-2023
"ನಮ್ಮ ಕಷ್ಟಗಳಿಗಿಂತಲೂ ನಮ್ಮ ಬದುಕು ದೊಡ್ಡದು."

ಖ್ಯಾತ ರಂಗಕರ್ಮಿಗಳಾದ ಕೃಷ್ಣಮೂರ್ತಿ ಕವತ್ತಾರ್ ರವರ ಜೀವನ ಕುರಿತಾದ ಪಾಠ, ಪ್ರತಿಯೊಬ್ಬ ವ್ಯಕ್ತಿಯೂ ಕೇಳಲೇ ಬೇಕಾದ ಮಾತುಗಳು. ಒಮ್ಮೆ ಕೇಳಿ.
"ನಮ್ಮ ಕಷ್ಟಗಳಿಗಿಂತಲೂ ನಮ್ಮ ಬದುಕು ದೊಡ್ಡದು."
ನಿರ್ದೇಶಕರಾದ ಕೃಷ್ಣಮೂರ್ತಿ ಕವತ್ತಾರು ಅವರನ್ನು ಕುರಿತು
           ರಂಗಭೂಮಿ ಮತ್ತು ರಂಗ ಸಂಗೀತಗಳಲ್ಲಿ ಒಲುಮೆ ಮತ್ತು ಬದ್ಧತೆಗಳಿಂದದುಡಿಯುವ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರರು. ಬದುಕಿನ ಗತಿಮತಿಗಳನ್ನು ರಂಗಭೂಮಿಯ ಮೂಲಕವೇ ಕಟ್ಟಿಕೊಳ್ಳಬೇಕೆಂದು ಸತತ ಮೂರು ದಶಕಗಳಿಗಿಂತ ಹೆಚ್ಚು ಕಾಲ ರಂಗಭೂಮಿ ಕ್ಷೇತ್ರದಲ್ಲಿಯೇ ಅಹರ್ನಿಶಿ ಹುಡುಕಾಟ ಮಾಡುತ್ತಿರುವ ಕಲಾ ಮನಸ್ಸು ಇವರದ್ದಾಗಿದೆ. ಬಾಲ್ಯದಿಂದಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರಿಗೆ ಪ್ರಭಾವ ಉಂಟಾಗಿದ್ದರ ಪರಿಣಾಮವಾಗಿ ದಕ್ಷಿಣ ಕನ್ನಡದ, ಯಕ್ಷಗಾನ, ಭೂತಕೋಲ, ಭಜನೆ, ಸಂಗೀತ, ಮುಂತಾದ ಕಲಾರೂಪಗಳನ್ನು ಹಾಗೂ ಧಾರ್ಮಿಕ ಸಾಂಸ್ಕೃತಿಕ ವೈಭವವನ್ನು ಬೆರಗುಗಣ್ಣಿನಿಂದ ನೋಡುತ್ತಾ, ಕಲಿಯುತ್ತಾ ಕವತ್ತಾರರು ಕಲಾವಿದರಾಗಿ ರೂಪಗೊಂಡವರು, ನಂತರ ನೀನಾಸಂ ರಂಗಶಿಕ್ಷಣ ಕೆಂದ್ರದ ಮೂಲಕ ಪದವಿಯನ್ನು ಪಡೆದು ಇನ್ನೂರಕ್ಕೂ ಹೆಚ್ಚು ಅತ್ಯುತ್ತಮ ಕನ್ನಡ ನಾಟಕಗಳನ್ನು ರಂಗಭೂಮಿಗೆ ಇದುವರೆಗೂ ಕೊಡುಗೆ ನೀಡಿದ್ದಾರೆ.
ಪ್ರೇಕ್ಷಕ ಧರ್ಮ ಮತ್ತು ಸೃಜನಶೀಲತೆ ಎಂಬ ಕಲಾ ಮೀಮಾಂಸೆಯ ಮೂಲಕವೇ ತನ್ನೊಳಗಿನ ಕಲಾವಿದರನ್ನು ಕಂಡುಕೊಂಡು ಆ ಮೂಲಕ ಕನ್ನಡ ರಂಗಭೂಮಿಗೆ ಹೊಸ ಹೊಸ ಕಲಾವಿದರನ್ನು ರೂಪಿಸುತ್ತಾ ಬಂದಿದ್ದಾರೆ. ನಟನಾಗಿ ನಿರ್ದೇಶನಕನಾಗಿ ರಂಗಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುವ ಕವತ್ತಾರರು ಸಂಗೀತವನ್ನು ಅಪರಿಮಿತವಾಗಿ ಪ್ರೀತಿಸುತ್ತಲೇರಂಗ ಸಂಗೀತಕ್ಕೆ ತನ್ನ ನೆಲೆಯಲ್ಲಿಯೇ ಹೊಸದಾರಿಗಳನ್ನು ಕಂಡುಕೊಂಡವರು, ಸೃಷ್ಟಿ ಮತ್ತು ಮರು ಸೃಷ್ಟಿಯ ಸಾಧ್ಯತೆಗಳ ಮೂಲಕ ಸೃಜನಶೀಲತೆಯ ಮಾಂತ್ರಿಕ ಸ್ಪರ್ಶವನ್ನು ಹೊಸ ತಲೆಮಾರಿಗೆ ನಿರ್ದೇಶಕರಾಗಿ ಕವತ್ತಾರರು ನೀಡುತ್ತಾರೆ ಎನ್ನುವುದು ಮಹತ್ವದ ವಿಷಯ.
‘ಆಭಿನಯಿಸಬೇಡಿ, ಅನುಭವಿಸಿ’ ಎಂಬ ತಾತ್ವಿಕನೆಲೆಗಟ್ಟನ್ನು ತಾನು ನಂಬುತ್ತಾ ತನ್ನ ಅಭಿವ್ಯಕ್ತಿಗಳಲ್ಲೂ ಪರಿಚಯಿಸುತ್ತಾ ಮತ್ತು ತನ್ನಲ್ಲಿ ಕಲಿಯುವ ಕಲಾ ವಿದ್ಯಾರ್ಥಿ ಮಿತ ರಿಗೂ ಈ ಸಾಧ್ಯತೆಯ ಮೂಲಕ ಅಭಿನಯ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ತನಕ ಸಮಷ್ಟಿಪಜ್ಜೆಯನ್ನು ರಂಗಭೂಮಿಯ ಮೂಲಕ ಉಣಬಡಿಸುವ ಸಮರ್ಥ ನಾಟಕದ ಮೇಷ್ಟ್ರು ಕೃಷ್ಣಮೂರ್ತಿ ಕವತ್ತಾರರು, ಸುಮಾರು ಮೂರು ದಶಕಗಳಿಂದ ರಂಗಭೂಮಿಯನ್ನೇ ನಂಬಿ ಬದುಕುತ್ತಿರುವ ಇವರು ಅತ್ಯಂತ ಕ್ರಿಯಾಶೀಲರು. ನಾಟಕಕ್ಕೆ ಇರುವ ಎಲ್ಲ ಆಯಾಮಗಳಲ್ಲೂ ಹೊಸ ಹೊಸ ಸಾಧ್ಯತೆಗಳನ್ನು ಹುಡುಕುತ್ತಿರುವ ಇವರು ನಿಜಕ್ಕೂ ರಂಗಭೂಮಿಯ ‘ಸಾವಯವ ಪಜೆ ಕೊರೋನಾದಂತಹ ಬಿಕ್ಕಟ್ಟಿನ ಕಾಲದಲ್ಲೂ ಇಡೀ ಜಗತ್ತೇ ಸ್ತಬ್ಧವಾಗಿದ್ದರೂ ಇದಕ್ಕೂ ಹೆಚ್ಚು ವಾಟಗಳನ್ನು ನಿರ್ದೇಶಿಸಿ: ಪ್ರದರ್ಶನ ಮಾಡಿಸಿದ ಕಎತ್ತಿರಲು ಕನ್ನಡ ರಂಗಭೂಮಿ ಮಾತ್ರವ ಭಾರತೀಯ ರಂಗಭೂಮಿಯಲ್ಲೇ ಕಾಯಕ ನಿಷ್ಟ ಹೆಮ್ಮೆಯ ರಂಗವ್ಯಕಿತ್ತ
ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಒಳಗೊಂಡಂತೆ ಇದುವರೆಗೂ ಹಲವು ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿದೆ. ಅಲ್ಲದೇ ಕಿರುತೆರೆ ಮತ್ತು ಹಿರಿತೆರೆಗಳಲ್ಲೂ ಯಶಸ್ವಿ ಕಲಾವಿದರಾಗಿ ಕೃಷ್ಣಮೂರ್ತಿ ಕವತ್ತಾರರು ಕನ್ನಡದ ಮನಸುಗಳ ಜೊತೆ ಇದ್ದಾರೆ.


--ರಂಗವರ್ಣ - Rangavarna
.


kkkkkk

kkkkkk

kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img